ಮೂಡುಬೆಳ್ಳೆ, ಸೆ. 15: ನೂತನ ಕಾಪು ತಾಲೂಕಿನ ಗ್ರಾಮ ಕರಣಿಕರ ಸಂಘದ ಅಧ್ಯಕ್ಷರಾಗಿ
ಶಿರ್ವದ ಗ್ರಾಮ ಕರಣಿಕ ವಿಜಯ್ ಅವರು ಆಯ್ಕೆಯಾಗಿದ್ದಾರೆ. ವಿಜಯ್ ಅವರು ಹಿರಿಯ ಗ್ರಾಮ ಕರಣಿಕರಾಗಿದ್ದು
ಈ ಹಿಂದೆ ಪ್ರಭಾರ ರಾಜಸ್ವ ಪರಿವೀಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು. ಸಾರ್ವಜನಿಕರೊಂದಿಗೆ ಸದಾ ನಗುಮುಖದಿಂದ
ವ್ಯವಹರಿಸುವ ಸಂವೇದನಾಶೀಲ ಅಧಿಕಾರಿ ವಿಜಯ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಸಂಘವನ್ನೂ ಕರ್ತವ್ಯ
ನಿರ್ವಹಿಸುವಷ್ಟೇ ಕಾಳಜಿಯಿಂದ ಮುನ್ನಡೆಸಲಿದ್ದಾರೆ.
ಸಂಘದ ಉಪಾಧ್ಯಕ್ಷರಾಗಿ ಕುರ್ಕಾಲು ಗ್ರಾಮ ಕರಣಿಕರಾದ ಕ್ಲೇರೆನ್ಸ್ ಲೆಸ್ಟನ್
ಅವರು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಲೋಕನಾಥ ಲಮಾಣಿ, ಸಹಕಾರ್ಯದರ್ಶಿಗಳಾಗಿ ಶ್ಯಾಮ
ಸುಂದರ್, ಮಾನಸ ಬಿ.ಕೆ. ಆಯ್ಕೆಯಾಗಿದ್ದಾರೆ. ಸಂಘಟನಾ ಕಾರ್ಯದರ್ಶಿಯಾಗಿ ಪ್ರದೀಪ್ ಕುಮಾರ್, ಕ್ರೀಡಾ
ಕಾರ್ಯದರ್ಶಿಯಾಗಿ ಅರುಣ್ ಕುಮಾರ್, ಕೋಶಾಧಿಕಾರಿಯಾಗಿ ಶ್ವೇತಾ ಪಿ. ಸುವರ್ಣ, ಜಿಲ್ಲಾ ಸಂಘದ ಪ್ರತಿನಿಧಿಯಾಗಿ
ಗಣೇಶ ಮೇಸ್ತ ಆಯ್ಕೆಯಾಗಿದ್ದಾರೆ.
No comments:
Post a Comment